ಸೋನಿಯಾ
ಗಾಂಧಿ ಮಾಡಿ ಮುದ್ದು
ರಾಹುಲ್
ಗಾಂಧಿ ಆದ ಪೆದ್ದು
ಮೋದಿ ಬಂದ ದೇಶಕ್ಕಾಗಿ ಎದ್ದು
ಪಿ ಎಂ ಆದ ಜನರ
ಮನಸ ಗೆದ್ದು
ಸಿದ್ರಾಮಣ್ಣನ
ನಿದ್ದೆಗೆ ಸಿಕ್ಕಿಲ್ಲ ಮದ್ದು
ಜನ ನಗ್ತಾ
ಇದಾರೆ ಬಿದ್ದು ಬಿದ್ದು
ಹೇಗೋ ಸರ್ಕಾರ ನಡೀತಿದೆ ಎದ್ದು ಬಿದ್ದು
ಯಾರಿಗೂ
ಕೇಳ್ತಿಲ್ಲ ದೊಡ್ಡಗೌಡರ ಸದ್ದು
ಸದಾನಂದಗೌಡರಿಗೆ
ಮಗ ಕೊಟ್ಟ ಸರಿಯಾದ ಗುದ್ದು
-ಇಷ್ಟೆಲ್ಲರ
ನಡುವೆ-
ನಮ್ಮ ಕರ್ನಾಟಕ ಕ್ರಿಕೆಟ್ ಟೀಮ್
ಬೀಗುತಿದೆ ಗೆದ್ದು ಗೆದ್ದು
ಬೆಂಗಳೂರಲ್ಲಿ
ಬಿತ್ತು ಕೊನೇಲಿ ಒಂದು ಬಾಂಬು
ಪೊಲೀಸ್
ಹೇಳ್ತಾರೆ ನಾವಿದ್ದೀವಿ ನಂಬು
ಅವರ ಕೈಲಿ ಮುರಿಯಕ್ಕಾಗಲಿಲ್ಲ ಉಗ್ರಗಾಮಿಗಳ ಕೊಂಬು
ಜನ ಮಾತ್ರ ಏರ್ತಾ ಇದಾರೆ ಬಿದಿರು ಬೊಂಬು
ಯಾಕೆ ಬೇಕು ಈ ಅನಿಷ್ಟ
ಬಾಂಬು.|
ಜಾಸ್ತಿ
ಆಗೋಯ್ತು ತಲೆಗೆಟ್ಟವರ ಜ್ಯೋತಿಷ್ಯ
ಅಂತಹವರನ್ನೇ
ಕರೆದು ಕೂರಿಸಿಕೊಳ್ಳುತ್ತಾರೆ ನಮ್ ಮೀಡೀಯ
ಕೇಳಿ ನಂಬಿದ್ರೆ ಇವರು ಹೇಳೋ ಭವಿಷ್ಯ
ಚಿಂತೆಯಲ್ಲೇ
ಮುಗಿದು ಹೋಗುತ್ತೆ ಮನುಷ್ಯನ ಆಯುಷ್ಯ
ಬೆಂಗಳೂರು
ಜನರ ಬಾಯಲ್ಲಿ ವಾಟ್ ಯಾ ವಾಟ್
ಯಾ
ಹೀಗೆ ಮುಂದುವರೆದರೆ ಕನ್ನಡ ಮಾಯಾ!
ಹೊಸ ವರುಷದಿಂದಾದರೂ ಬದಲಾಗಲಿ ಜನರ ಅಭಿಪ್ರಾಯ.
ಬೆಳೆಸಿ
ನಮ್ಮ ಕನ್ನಡ ಭಾಷೆಯ.|
ಹೊಸ ವರ್ಷದ ಹಾರ್ದಿಕ ಶುಭಾಶಯ
೨೦೧೫ ತರಲಿ ನಿಮ್ಮಲ್ಲಿ
ಹೊಸ ಹೊಸ ಐಡಿಯಾ.|