Wednesday 31 December 2014

ಅಮರವಾಯ್ತು 2014 - ವರವಾಗಲಿ-2015

ಸೋನಿಯಾ ಗಾಂಧಿ ಮಾಡಿ ಮುದ್ದು
ರಾಹುಲ್ ಗಾಂಧಿ ಆದ ಪೆದ್ದು
ಮೋದಿ ಬಂದ ದೇಶಕ್ಕಾಗಿ ಎದ್ದು
ಪಿ ಎಂ ಆದ ಜನರ ಮನಸ ಗೆದ್ದು

ಸಿದ್ರಾಮಣ್ಣನ ನಿದ್ದೆಗೆ ಸಿಕ್ಕಿಲ್ಲ ಮದ್ದು
ಜನ ನಗ್ತಾ ಇದಾರೆ ಬಿದ್ದು ಬಿದ್ದು
ಹೇಗೋ ಸರ್ಕಾರ ನಡೀತಿದೆ ಎದ್ದು ಬಿದ್ದು
ಯಾರಿಗೂ ಕೇಳ್ತಿಲ್ಲ ದೊಡ್ಡಗೌಡರ ಸದ್ದು
ಸದಾನಂದಗೌಡರಿಗೆ ಮಗ ಕೊಟ್ಟ ಸರಿಯಾದ ಗುದ್ದು
-ಇಷ್ಟೆಲ್ಲರ ನಡುವೆ-
ನಮ್ಮ ಕರ್ನಾಟಕ ಕ್ರಿಕೆಟ್ ಟೀಮ್ ಬೀಗುತಿದೆ ಗೆದ್ದು ಗೆದ್ದು

ಬೆಂಗಳೂರಲ್ಲಿ ಬಿತ್ತು ಕೊನೇಲಿ ಒಂದು ಬಾಂಬು
ಪೊಲೀಸ್ ಹೇಳ್ತಾರೆ ನಾವಿದ್ದೀವಿ ನಂಬು
ಅವರ ಕೈಲಿ ಮುರಿಯಕ್ಕಾಗಲಿಲ್ಲ ಉಗ್ರಗಾಮಿಗಳ ಕೊಂಬು
ಜನ ಮಾತ್ರ ಏರ್ತಾ ಇದಾರೆ ಬಿದಿರು ಬೊಂಬು
ಯಾಕೆ ಬೇಕು ಅನಿಷ್ಟ ಬಾಂಬು.|

ಜಾಸ್ತಿ ಆಗೋಯ್ತು ತಲೆಗೆಟ್ಟವರ ಜ್ಯೋತಿಷ್ಯ
ಅಂತಹವರನ್ನೇ ಕರೆದು ಕೂರಿಸಿಕೊಳ್ಳುತ್ತಾರೆ ನಮ್ ಮೀಡೀಯ
ಕೇಳಿ ನಂಬಿದ್ರೆ ಇವರು ಹೇಳೋ ಭವಿಷ್ಯ
ಚಿಂತೆಯಲ್ಲೇ ಮುಗಿದು ಹೋಗುತ್ತೆ ಮನುಷ್ಯನ ಆಯುಷ್ಯ

ಬೆಂಗಳೂರು ಜನರ ಬಾಯಲ್ಲಿ ವಾಟ್ ಯಾ ವಾಟ್ ಯಾ
ಹೀಗೆ ಮುಂದುವರೆದರೆ ಕನ್ನಡ ಮಾಯಾ!
ಹೊಸ ವರುಷದಿಂದಾದರೂ ಬದಲಾಗಲಿ ಜನರ ಅಭಿಪ್ರಾಯ.
ಬೆಳೆಸಿ ನಮ್ಮ ಕನ್ನಡ ಭಾಷೆಯ.|

ಹೊಸ ವರ್ಷದ ಹಾರ್ದಿಕ ಶುಭಾಶಯ

೨೦೧೫ ತರಲಿ ನಿಮ್ಮಲ್ಲಿ ಹೊಸ ಹೊಸ ಐಡಿಯಾ.|


Friday 19 December 2014

ಕನಸಿಗೆ ಮನಸೊಂದಿದ್ದರೆ ಸಾಕು

ಕನಸು ಕಾಣಲು ಕಾಗುಣಿತ ಏಕೆ
ಕೂಲಿಂಗ್ ಗ್ಲಾಸ್ ಕಣ್ಣಿಗಾಕ ಬೇಕೆ

ವೈಟ್ ಹೌಸಲೂ ಕೂತು ಬಂದೆ
ಒಬಾಮಾ ಜೊತೆ ಫೋಟೋಗೂ ನಿಂದೆ
ಮೋದಿ ಜೊತೆ ಮಾತಾಡಲೆಂದೇ
ಮೈಸೂರಿಗೆ ನಾ ಕರೆತಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು

ಸೂರ್ಯನ ಜೊತೆ ಸುತ್ತಾಡಿ ಬಂದೆ
ಚಂದ್ರನೊಂದಿಗೆ ಚೆಂಡಾಡಿ ಬಂದೆ
ಗುರುವಿಗೆ ಗುಂಡ್ ಹಾಕ್ಸಿ ಬಂದೆ
ಮಂಗಳನ ಮಂಗ ಮಾಡಿ ಬಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು

ಉಗ್ರಗಾಮಿಗೆ ಉರುಳು ಬಿಗಿದು
ಅತ್ಯಾಚಾರಿಯ ಅಟ್ಟಾಡಿಸಿ ಹೊಡೆದು
ಭ್ರಷ್ಟರಿಗೆ ಬೂಟಲ್ಲಿ ಬಡಿದು
ಕಳ್ಳರ, ಸುಳ್ಳರ ತಿದ್ದಿ ತೀಡಿ
ಉತ್ತಮ ಸಮಾಜ ಕಟ್ಟಿ ಗೆಲ್ಲಲು
ನಾ ಭುವಿಗೆ ಅವತಾರವ ಎತ್ತಿ ಬಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು.|

******************


(ಇಷ್ಟೆಲ್ಲಾ ನಾ ಮಾಡಿರುವಾಗ ನೀವು ಒಳ್ಳೊಳ್ಳೆ ಕನಸು ಕಾಣ್ರಪ್ಪ
ಒಂದಾದ್ರು ನನಸು ಮಾಡಿ ಅಷ್ಟೇ ಸಾಕಪ್ಪ :P )