Thursday 5 September 2013

ದೀಪವ ಹಚ್ಚುತಾ

ದೀಪವ ಹಚ್ಚುತಾ
ಧೀರನ ನೆನೆದಳು
ದೇಗುಲದಂತ ಮನಸಿನಲಿ
ದೇಶವ ಕಾಯುತ
ಧೈರ್ಯದಿ ನುಗ್ಗುತ
ವೈರಿಯ ಹುಟ್ಟಡಗಿಸೋ
ಮನಧೀರನ  ಹರಸುತಲಿ
ವರವನು ಬೇಡುತ
ಮನದಲೆ ಹಾಡುತ
ಮೆಲ್ಲನೆ ಭಜಿಸಿದಳು ಭಕುತಿಯಲಿ
ತನ್ನೊಡೆಯನಿಗೆ ರಕ್ಷೆಯ
ಕರುಣಿಸೋ ತಂದೆ
ಅವ ದೇಶದ ಕೀರ್ತಿಯ ಬೆಳಗಿಸಲಿ
ಹೆಮ್ಮೆಯ ವೀರನಾಗಿ ಮೆರೆಯುತಿರಲಿ
ಹೆಮ್ಮೆಯ ವೀರನಾಗಿ ಮೆರೆಯುತಿರಲಿ

         -ಸೋಮೇಶ್ ಎನ್  ಗೌಡ

No comments:

Post a Comment