ಗದ್ದೆ ಪಕ್ಕದ ಹೊಲದಲ್ಲಿ
ಉದ್ದುದ್ದ ನಿಂತಿದ್ದ ಜೋಳದ ನಡುವಲ್ಲಿ
ಮುದ್ದಾಡಿ ಹೋದವನ
ನೆನಪೇಕೋ ಇಂದು
ಈ ಪೆದ್ಡಿ ಮನದಲ್ಲಿ
ಗಿರಗಿಟ್ಲೆ ಹೊಡೆಯುತ್ತಿದೆ
ಮಂಜು ಮಂಜಿನ ಮುಸುಕಲ್ಲಿ
ಅಂಜುತ್ತಾ ನಿಂತಿದ್ದ ನನ್ನಯ ಎದೆಯಲ್ಲಿ
ಮತ್ತೇರಿಸಿ ಹೋದ
ನನ್ನಯ ನಲ್ಲನ
ನೆನಪುಗಳೇಕೋ ಇಂದು
ನನ್ನ ಕಾಡುತ್ತಿವೆ
ಓಡೋಡಿ ಬಂದು ಕೆಸರಲ್ಲಿ
ಮಲ್ಲಿಗೆ ಇಟ್ಟು ಮುಡಿಯಲ್ಲಿ
ಪರಿಮಳವ ಹೀರುತ್ತಾ
ಕಣ್ಣಲ್ಲೇ ಕುಕ್ಕುತ್ತಾ
ನನ್ನ ಮೌನಿ ಮಾಡಿದವನ
ನೆನಪುಗಳಿಂದು
ಎಡೆಬಿಡದೆ ಕೆಣಕುತ್ತಿವೆ..
ಕೇಳು ಏಕೆಂದು??
ಸೋಮೇಶ್ ಎನ್ ಗೌಡ
ಉದ್ದುದ್ದ ನಿಂತಿದ್ದ ಜೋಳದ ನಡುವಲ್ಲಿ
ಮುದ್ದಾಡಿ ಹೋದವನ
ನೆನಪೇಕೋ ಇಂದು
ಈ ಪೆದ್ಡಿ ಮನದಲ್ಲಿ
ಗಿರಗಿಟ್ಲೆ ಹೊಡೆಯುತ್ತಿದೆ
ಮಂಜು ಮಂಜಿನ ಮುಸುಕಲ್ಲಿ
ಅಂಜುತ್ತಾ ನಿಂತಿದ್ದ ನನ್ನಯ ಎದೆಯಲ್ಲಿ
ಮತ್ತೇರಿಸಿ ಹೋದ
ನನ್ನಯ ನಲ್ಲನ
ನೆನಪುಗಳೇಕೋ ಇಂದು
ನನ್ನ ಕಾಡುತ್ತಿವೆ
ಓಡೋಡಿ ಬಂದು ಕೆಸರಲ್ಲಿ
ಮಲ್ಲಿಗೆ ಇಟ್ಟು ಮುಡಿಯಲ್ಲಿ
ಪರಿಮಳವ ಹೀರುತ್ತಾ
ಕಣ್ಣಲ್ಲೇ ಕುಕ್ಕುತ್ತಾ
ನನ್ನ ಮೌನಿ ಮಾಡಿದವನ
ನೆನಪುಗಳಿಂದು
ಎಡೆಬಿಡದೆ ಕೆಣಕುತ್ತಿವೆ..
ಕೇಳು ಏಕೆಂದು??
ಸೋಮೇಶ್ ಎನ್ ಗೌಡ
No comments:
Post a Comment