Wednesday 12 December 2012

ಉತ್ತಮ ಭವಿಷ್ಯಕ್ಕಾಗಿ ಜಲ ಹೋರಾಟ


ಈ ಹೋರಾಟಕೆ ಕೈ ಜೋಡಿಸಿ ಹೋರಾಡು ಬಾ ಗೆಳೆಯ
ರೈತನ ಉಳಿವಿಗಾಗಿ ಪಣ ತೊಟ್ಟು ಬಾ ಗೆಳೆಯ

ಮುನ್ನುಗ್ಗಿ ನಡೆಯಬೇಕು ನಾವು ನೀರಾವರಿಗಾಗಿ ಇಂದೆ
ಮಳೆಯನ್ನೇ ನಂಬಿ ಬದುಕಲಾರೆವು ಇನ್ನು ಮುಂದೆ
ಕೆರೆ ಕಟ್ಟೆಗಳು ಬತ್ತಿವೆ ದನ ಕರುಗಳು ನರಳುತ್ತಿವೆ
ಬೆಳೆಯು ನಾಶವಾಗುತ್ತಿರಲು ರೈತನ ಒಡಲು ಸುಟ್ಟಿದೆ

ಕನಸೆಲ್ಲ ಕಮರಿದೆ ಕ್ರಾಂತಿ ಗೀತೆ ಮೂಡಿದೆ
ನಮ್ಮ ಉಳಿವಿಗಾಗಿ ನಾವು ಹೋರಾಡಲೇ ಬೇಕಿದೆ
ಜಲದ ಬೆಲೆಯ ತಿಳಿಯದೆ ಹಾಳು ಮಾಡಬೇಡಿರಿ
ಅನ್ನ ನೀಡೋ ರೈತನ ರಕ್ಷಣೆಗೆ ಬನ್ನಿರಿ

ಉತ್ತಮ ಭವಿಷ್ಯಕ್ಕೆ ಬೇಕು ನೀರಾವರಿ ವ್ಯವಸ್ತೆ
ಮುಂದಿನ ಪೀಳಿಗೆ ಬರದಿರಲಿ ಈ ಅವಸ್ತೆ
ಮುಂದೆ ಆಗೋ ಅನಾಹುತದ ಚಿಂತೆ ಮಾಡಬೇಕಿದೆ
ಇಂದೆ ನಾವು ಛಲವ ತೊಟ್ಟು ಫಲವ ಪಡೆಯಬೇಕಿದೆ.|

ಈ ಹೋರಾಟಕೆ ಕೈ ಜೋಡಿಸಿ ಹೋರಾಡು ಬಾ ಗೆಳೆಯ
ರೈತನ ಉಳಿವಿಗಾಗಿ ಪಣ ತೊಟ್ಟು ಬಾ ಗೆಳೆಯ...ಬಾ ಗೆಳೆಯ

                                     ಸೋಮೇಶ್  ಎನ್ ಗೌಡ

No comments:

Post a Comment