ಬೇಸರದಿ ಕುಂತರು
ಹಸಿವಿನಿಂದ ಬಳಲಿದರು
ಧೈರ್ಯಗೆಟ್ಟು ಹಿಂದೆ ಸರಿದರು
ಮತ್ತೆ ಬಡಿದೆಬ್ಬಿಸುವುದೆನ್ನ
ಅದೇ 'ಕವನ'
ಒಂಟಿಯಾಗಿ ನಡೆವಾಗ
ಖುಷಿಯಿಂದ ಮೆರೆವಾಗ
ಸಂಕಟದಿ ನರಳಾಡುವಾಗ
ಕೈ ಜೋಡಿಸಿ ಜೊತೆ ಸೇರುವುದೊಂದೇ ನನ್ನ
ಅದೇ 'ಕವನ'
ಮುದ ನೀಡಲು ಮನಸ್ಸಿಗೆ
ಸವಿ ನುಡಿಯಲು ಬಾಯಿಗೆ
ಪ್ರತಿಯೊಬ್ಬರ ಬಾಳಿಗೆ
ಬೇಕೇ ಬೇಕು!!
ಸುಂದರ 'ಕವನ' .
-ಸೋಮೇಶ್ ಎನ್ ಗೌಡ
No comments:
Post a Comment