Tuesday 20 November 2012

ರೈತನ ಕೂಗು

ಮೋಡ ಬಿತ್ತಿ ಮಳೆ ತರುವುದೆಲ್ಲಿ
ಹೊಲವ ಬಿತ್ತಿ ಕಳೆ ಕೀಳುವುದೆಲ್ಲಿ
ಆಸೆ ಬಿತ್ತಿ ಕನಸ ಕಾಣುವುದೆಲ್ಲಿ
ಬರಗಾಲ ಬಂದು ಬರಡಾಗೈತೆ ಬದುಕು
ಇನ್ನೆಲ್ಲಿದೆ ನಮ್ಮ ಬಾಳಲ್ಲಿ ಬೆಳಕು

ಸೂರ್ಯ ಚಂದ್ರ ಇರುವವರೆಗೂ
ದುಡಿಯಬೇಕೆಂಬ ನಮ್ಮಯ ಛಲವು
ಕುಗ್ಗೈತಿ ನೋಡು ಇಲ್ಲಿ
ಮತ್ತೆ ಬಡಿದೆಬ್ಬಿಸುವವರು ಯಾರಿಲ್ಲಿ

ಕೆರೆಯೂ ಬತ್ತಿ ಹೋಯ್ತು
ಮಮತೆ ಪ್ರೀತಿ ಮಾಯವಾಯ್ತು
ಅಳಲು ಕಣ್ನೀರೆ ಖಾಲಿಯಾಗಿರಲು
ಈ ಕಷ್ಟಗಳಿಗೆ ಕೊನೆ ಸಿಗುವುದು ಯಾವತ್ತು.

                     -ಸೋಮೇಶ್ ಎನ್ ಗೌಡ

No comments:

Post a Comment